ಬಂದರಿನ ಅಲೆ

ಬಿಕ್ಕಳು ತಾಯಿ
ಶರಧಿಯಾಳದಿ ಮುಖ ಹುಗಿಸಿ
ಕಣ್ಣೀರ ಕೋಡಿ ಹಗುರ ಹೊರೆ
ಸಾಗರ ಗರ್ಭ ಉಕ್ಕಿ ಸಿಡಿದು
ಈಗ ನೀರನೊರೆ
ಕೆನೆಕೆನೆಯ ಲಾಲಾರಸವಲ್ಲ,
ಅದು ಲಾವಾ
ಉಗುಳುತ್ತಿದೆ ಬೆಂಕಿ ಕೆಂಡ.

ತಾಯ್ತನದ ಹಿರಿಮೆಯೆ ಹಾಗೆ
ತನ್ನ ಇರಿದು, ಮುರಿದು, ಇಂಚು ಇಂಚು
ಭಂಗಿಸಿದರೂ ಕಣ್ಣಂಚ ಕೊನೆ ಒದ್ದೆಯಷ್ಟೇ.
ಮಕ್ಕಳಿಲ್ಲದ ಕಡೆಯಲ್ಲಿ
ಮರಭೂಮಿ ನಾಡಲ್ಲಿ
ಸಾಗರನ ಆಳದಲ್ಲಿ ವಿಷವ ಕಕ್ಕಿ
ತಣ್ಣಗಾಗಲು ಬಯಸಿದಳಷ್ಟೇ,

ಆದರೆ ದಡದ ಬುಡದಲಿ ಕಂಡಿದ್ದು
ವಾರಿಧಿಯ ಧಿಮಿಕಿತ ಕಂಪನ.
ಸೌಮ್ಯ ತೆರೆಗಳ ದೈತ್ಯ ದರ್ಶನ
ಎದ್ದ ಅಲೆಗಳಿಗೆ ಮತ್ತೂ
ಹಗೆಯ ಹೊಗೆ ಎಬ್ಬಿಸುವ ಬಯಕೆ
ಹೆಸರಿಲ್ಲದೇ ಬಂದ
ಅಲೆಯಲ್ಲಿ ಕೊಚ್ಚಿ ಹೋಗುತ್ತ
ಬಿದಿರ ಕಡ್ಡಿಯ ಹಿಡಿದು
ದಡ ಸೇರಲಾದೀತೇ?
ನಿದ್ದೆಯಿಲ್ಲದ ರಾತ್ರಿಯಲ್ಲಿ
ಕಂಡ ಕನಸಂತೆ
ಬಂದರಿನ ಅಲೆಗಳು ಬಂದದ್ದು
ತಿಳಿಯುವ ಮೊದಲೆ
ಸಮುದ್ರರಾಜನ ಬೆಳ್ನೊರೆ
ರಕ್ತರಾಡಿ ಕೆಂಪು
ಹೆಣಗಳ ರಾಶಿ
ಒಟ್ಟು ಮಾಡುವ ಗುತ್ತಿಗೆ ಹಿಡಿದಿದ್ದ
ಅಲೆರಾಯ, ಮೆಲ್ಲನೆ ಕರೆದೊಯ್ದು
ಜೀವ ಹೀರುವ ಕೆಲಸದಲ್ಲಿದ್ದಳು ಜಲಕನ್ಯೆ
ದಡ ಮಾತ್ರ ತೊಳೆದದ್ದಾಯ್ತೋ ಎಂದರೆ
ಇಲ್ಲ, ಬಾಲ್ಕನಿಯ ಎರಡಂತಸ್ತಿನ ಮನೆ
ನೋಡುತ್ತ ನೋಡುತ್ತ ನೆಲಕ್ಕೆ
ದಿನವೊಂದು ಎಡಬಿಡದ ಒತ್ತಡದ ಜಾತ್ರೆ
ಮರುದಿನ ಅದು ತೊಳೆದ ಪಟ್ಟಣ.
ಹೀಗಾಗಿ
ಈಗೀಗ ಸುನಾಮಿ ಹೆಸರು
ಬಹಳ ಪ್ರಸಿದ್ಧ. ಅನ್ವರ್ಥನಾಮಕ್ಕೆ
ಆಟಗಾರರು, ಸಿನೆಮಾತಾರೆಯರು
ಬಿಡದೆ ನೆರೆಮನೆಯಕ್ಕನ ಮಗನೂ
ಸುನಾಮಿ ಸೋಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂತ ಭವಿಷ್ಯಗಳ ನಡುವೆ
Next post ಶಬರಿ – ೬

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys